Wednesday 24 December 2014

Sanna kathe ...6

"ಪವಿತ್ರಳು":

ಸಮಾಜದ ಕಣ್ಣಿಗೆ ಆಕೆ ಒಬ್ಬ ವೇಶ್ಯೆ. ಎದುರಿದ್ದಾಗ ಎಲ್ಲಾ ಹೀಯಾಳಿಸಿ ಮಾತಾಡುವವರೇ. ಹತ್ತಿರ ಸುಳಿದರು ಹತ್ತು ಅಡಿ ದೂರ ನಿಲ್ಲುವವರೇ. ಆದರೆ ರಾತ್ರಿಯಾಯಿತೆಂದರೆ ಮತ್ತಿನ ಗುಂಗಲ್ಲಿ ಎಲ್ಲಾ ಆಕೆಯ ಮಗ್ಗುಲಲ್ಲಿ ಬಿದ್ದು ಹೊರಲಾಡುವವರೇ. ಕಾರಣ “ಕಾಮಕ್ಕೆ ಕಣ್ಣಿಲ್ಲ” ಕೇವಲ ಕಣ್ಣಷ್ಟೇ ಅಲ್ಲ, ಮನಸ್ಸು –ಹೃದಯ ಯಾವುದೂ ಇಲ್ಲ.
ಆಗಷ್ಟೇ ಕಾಲೇಜು ಮುಗಿಸಿ ಪಟ್ಟಣ ಸೇರಿದವಳು ಅವಳು. ನೋಡಲು ಅಷ್ಟೇ ಸುಂದರಿ . ಕಾಲೇಜಿನಲ್ಲಿರುವಾಗಲೇ ‘ಕಾಲೇಜ್ ಕ್ವೀನ್ ‘ ಅನಿಸಿಕೊಂಡವಳು. ಪಕ್ಕದಲ್ಲಿ ಗೆಳತಿಯರಿದ್ದರೂ ಇವಳ ಕಡೆಗೆ ಗಮನ ಕೊಡದ ಹುಡುಗರೇ ಇಲ್ಲ ಅನ್ನಬಹುದು. ಓದಿನಲ್ಲಿ ಪ್ರಥಮವಲ್ಲದಿದ್ದರೂ ,ಹಿಂದೆಯಂತೂ ಇರಲಿಲ್ಲ. ಸೌಂದರ್ಯದ ಜೊತೆಗೆ ಅವಳ ನಡೆ-ನುಡಿಯು ಮೆಚ್ಚುವಂತದ್ದೆ. ಅಪ್ಪ – ಅಮ್ಮ ಒಂದು ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರೂ, ಹೊಟ್ಟೆ –ಬಟ್ಟೆಗೇನು ಕೊರತೆಯಿರಲಿಲ್ಲ.ಮಗಳು ಬೆಳೆದು ದೊಡ್ದವಲಾಗಿದ್ದರು ,ಮದುವೆ ಮಾಡುವ ಯೋಚನೆಯಿದ್ದರು ಅವಳ ಕೆಲಸಕ್ಕೆ ಸೇರಿ ದುಡಿಯುವ ಹಠ ಇವರನ್ನು ಸುಮ್ಮನಾಗಿಸಿತ್ತು.
ಓದು ಮುಗಿಯುತ್ತಲೇ ಕೆಲಸ ಅರಸುತ್ತ ಪಟ್ಟಣ ಸೇರಿದಳು. ಹೊಸ ಜಾಗ, ಹೊಸ ಜೀವನ ಕಷ್ಟಕರವೆನಿಸಿದರೂ ಬಹುಬೇಗನೆ ಅದಕ್ಕೆ ಒಗ್ಗಿಕೊಂಡಳು. ಪರಿಚಿತರ ಸಹಾಯದಿಂದ ಒಂದು MNC ಕಂಪೆನಿಯಲ್ಲಿ receptionist ಆಗಿ ಕೆಲಸಕ್ಕೆ ಸೇರಿದ್ದಳು. ನೋಡಲು ಸುಂದರವಾಗಿದ್ದರಿಂದ , ಮಾತು ಚೆನ್ನಾಗಿ ಆಡುತ್ತಿದ್ದರಿಂದ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವೇನು ಆಗಿರಲಿಲ್ಲ. ಕೆಲಸವೇನೋ ಚೆನ್ನಾಗಿ ಸಾಗಿತ್ತು.
ಒಂದುದಿನ ಎಂದಿನಂತೆ ತನ್ನ ಮೇಲ್ ಬಾಕ್ಸ್ ನೋಡುತ್ತಿದ್ದವಳಿಗೆ ಅವಳ ಮೇಲಾಧಿಕಾರಿಯಿಂದ ಬಂದ ಮೇಲ್ ಆಘಾತವನ್ನುಂಟು ಮಾಡಿತ್ತು. ಅದೂ ಅವಳು ಬೇರೆಬ್ಬನ ಜೊತೆ ಮಲಗಿರುವ ಭಂಗಿಯಲ್ಲಿ ಫೋಟೋ. ಒಮ್ಮೆಲೇ ಏನು ಮಾಡಬೇಕೆಂದು ತೋಚದೆ ಅವಾಕ್ಕಾಗಿ ಕುಳಿತು ಬಿಟ್ಟಳು. ಸ್ವಲ್ಪ ಸಮಯದ ನಂತರ ಸಾವರಿಸಿಕೊಂಡು ಇದೇ ಸರಿಯಾದ ಯೋಚನೆ ಎಂದು ನಿರ್ಧರಿಸಿ ತನಗೆ ಕೆಲಸ ಕೊಡಿಸಿದವರಿಗೆ ಕಾಲ್ ಮಾಡಲು ಅನುವಾದಳು. ಅಕಸ್ಮಾತ್ತಾಗಿ ಮೇಲ್ ನ ಕೆಳಗಿನ ಎರಡು ಸಾಲು ನೋಡಿದವಳಿಗೆ ಮತ್ತೊಂದು ಆಘಾತ ಕಾದಿತ್ತು. ‘ ನೀನು ಈ ರಾತ್ರಿ ಕೆಳಗಿನ ವಿಳಾಸಕ್ಕೆ ಬರದಿದ್ದರೆ ಈ ಫೋಟೋವನ್ನು ಅಂತರ್ಜಾಲದಲ್ಲಿ ಬಿತ್ತರಿಸುವುದಾಗಿ ‘ ಹಾಗು ಅದು ಅವಳಿಗೆ ಕೆಲಸ ಕೊಡಿಸಿದ ಮಹಾನುಭಾವನ ಅಡ್ರೆಸ್ಸೆ ಆಗಿತ್ತು. ಈಗ ಅವಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು.
ಆಫೀಸಿನಿಂದ ಬಂದವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ . ಎಲ್ಲಾ ಬಿಟ್ಟು ಮನೆಗೆ ವಾಪಸ್ ಹೋಗಿ ಬಿಡಲೇ ..!! ಹಾಗೆ ಮಾಡಿದರೆ ನಾಳೆ ಅವಳ ಫೋಟೋ ಅಂತರ್ಜಾಲದಲ್ಲಿ ಬರುವುದಲ್ಲದೆ ತನ್ನ ಹಾಗೂ ಮನೆತನದ ಮಾನ ಮರ್ಯಾದೆಯಲ್ಲಾ ಹರಾಜಾಗದೇ ಇರದು. ಯಾವುದು ಸರಿ ಯಾವುದು ತಪ್ಪು ಎಂಬ ತೊಳಲಾಟದಲ್ಲೇ ಅವರು ನೀಡಿದ್ದ ವಿಳಾಸಕ್ಕೆ ಆಟೋ ಹತ್ತಿ ಹೊರಟಳು. ಮುಂದೆ ನಡೆದ್ದದ್ದೆಲ್ಲವೂ ನರಕ. ದಿನಗಳು ಉರುಳಿತು ಒಬ್ಬರ ಹಿಂದೆ ಒಬ್ಬರಂತೆ ಆಫೀಸಿನಲ್ಲಿದ್ದ ಎಲ್ಲರ ದಾಹ ತೀರಿಸುವ ‘ಕಾಮ’ದೇನುವಾದಳು. ತಿಂಗಳುಗಳೇ ಉರುಳಿದವು ಈಗವಳು ಎಲ್ಲರ ಪಾಲಿಗೆ ಹಳಸಿದ ತಂಗಳನ್ನ. ಎಲ್ಲರೂ ಟೀಕಿಸುವವರೇ , ಎಲ್ಲರೂ ಛೀಮಾರಿ ಹಾಕುವವರೇ.
ಈಗ ಅವಳ ಮನಸಲ್ಲಿ ಏಳುತ್ತಿದ್ದ ಪ್ರಶ್ನೆಯೊಂದೇ , ಈ ಮೈಮಾರಿಕೊಂಡು ಬದುಕುವ ಬದುಕು ಒಂದು ಬದುಕೇ..ತಾನು ಮೈಲಿಗೆಯಾದನೇ..!!??
ತನ್ನನ್ನೇ ತಾನು ಕೇಳಿಕೊಳ್ಳತೊಡಗಿದಳು. ತಾನು ಯಾರಿಗೂ ಮನಸಾರೆ ತನ್ನನ್ನು ತಾನು ಅರ್ಪಿಸಿಕೊಂಡವಳಲ್ಲ. ಅವರೇ ಇವಳ ಮೇಲೆ ಬಿದ್ದು ತಮ್ಮ ದೇಹ ತೃಷೆ ತೀರಿಸಿಕೊಂಡವರು. ಅದು ಅನಿವಾರ್ಯವಾಗಿತ್ತೋ ಇಲ್ಲವೋ ಈಗ ಯೋಚಿಸಿ ಫಲವಿಲ್ಲ.
ತಾನು ಇನ್ನೂ ಪಾವಿತ್ರ್ಯಳೆ..!! ತಿಳಿಯಾದ ಕೊಳವ ಕೆದಕಿ , ಕೆಸರುಹೊಂಡ ಎಂದು ಜರಿಯುವ ಈ ಸಮಾಜದ ಮೇಲೆ ಅಸಹ್ಯವಾಗಿ , ಎದ್ದು ಆಟೋ ಹತ್ತಿ ಮತ್ತೆ ಹೊರಟಳು.

-ಸತ್ಯ..,

1 comment:

  1. Nice one...!!!

    could you please once visit ammanahaadugalu.blogspot.com
    and share your suggestions

    ReplyDelete