Wednesday 24 December 2014

Haleya barahagalu ... (7)

ಎತ್ತ ಸಾಗಿದೆ ನಮ್ಮ ಪೀಳಿಗೆ..
ಹಿಂದೊಮ್ಮೆ ಹಸಿದ ವ್ಯಾಘ್ರಗಳ ಕಂಡು ಹೆದರುತ್ತಿದ್ದೆವು..
ಅವನ್ನು ಕೊಂದು ತಿಂದು ತೇಗಿದ್ದಾಯ್ತು..
ಹಾವ ಕಂಡು ಭಯಬೀಳುತ್ತಿದ್ದೆವು..
ಅವನ್ನೂ ಹೊಸಕಿ ಮಣ್ಣು ಮಾಡಿದ್ದಾಯ್ತು..
ಬೀದಿ ನಾಯಿಗಳಿಗೆ ಹೆದರಿ ಮನೆಸೇರಿಕೊಳ್ಳುತ್ತಿದ್ದೆವು...
ಅವನ್ನೂ ಲಾರೀಲಿ ತುಂಬಿಸಿ ಹೊತ್ತೊಯ್ದಿದ್ದಾಯ್ತು..
ಉಳಿದಿದ್ದಾದರೂ ಏನಿನ್ನು ಭಯಬೀಳಲಿಕ್ಕೆ...!!
ಅದಕ್ಕೆ ಮಾನವರೆ ಎತ್ತುತ್ತಿರುವರಲ್ಲಾ ನಾನ ಅವತಾರವ..
ಹಸಿದ ಹೆಬ್ಬುಲಿಯಂತೆ ಎಗರಿ ಅತ್ಯಾಚಾರವೆಸಗುತ್ತಿರುವರು....
ಕಾಳ ಸರ್ಪದಂತೆ ತನಗಾಗದವರ ವಿರುದ್ದ ಸೇಡು ತೀರಿಸಿಕೊಳ್ಳಲು ಕಾಯುತಿರುವರು...
ಹುಚ್ಚು ನಾಯಿಯಂತೆ ಸಿಕ್ಕ ಸಿಕ್ಕವರನ್ನೆಲ್ಲಾ ಮಚ್ಚು ಲಾಂಗುಗಳಿಂದ ಕೊಚ್ಚುತಿರುವರು...
ಇದೇನಾ ನಾಗರೀಕ ಸಮಾಜ...
ಇಲ್ಲಾ ಮತ್ತೇ ಆದಿಮಾನವನಾಗುವ ಬಯಕೆಯಾ....!!!???

===================================================
ಬದಲಾವಣೆ ಜಗದ ನಿಯಮ...
ಬದಲಾಯಿಸೋದು ಜನರ ನಿಯಮ...
ಬದಲಾವಣೆಯಾ ಒಪ್ಪದೇ ಇರೋದು ಜಡತೆಯ ನಿಯಮ...

==================================================
ಕನಸಲ್ಲ...ಕಲ್ಪನೆಯಲ್ಲ...
ಕರುಣೆಯಿಲ್ಲ ...ಕಾರಣವಿಲ್ಲ...
ಕಾದಿರಲಿಲ್ಲ...ಕಾಡಿರಲಿಲ್ಲ...
ಕರೆದಿರಲಿಲ್ಲ...ಕಾಯಿಸಲಿಲ್ಲ...
ಕೇಳಲಿಲ್ಲ...ಕಿತ್ತುಕೊಳ್ಳಲಿಲ್ಲ...
ಕಿವುಡಲ್ಲ...ಕಿವಿಗೊಡಲಿಲ್ಲ...
ಕುರುಡಲ್ಲ...ಕಣ್ತೆರೆದು ನೋಡಲಿಲ್ಲ...
ಕಪ್ಪಲ್ಲ...ಕತ್ತಲೆಯಲ್ಲ...
ಕೊನೆಗೂ ...ಕೈಗೆಟುಕಲಿಲ್ಲ....

=================================================
ನಾನೊಬ್ಬ ಬಡವ:

ಓದು ಬರಹ ಬರದವರು...
ಬದುಕ ಹೆಣೆಯಲು ಹೆಣಗುವರು...
ಹೆಣಕ್ಕಿಂತ ಕೀಳಾಗಿ ಕಂಡರೂ...
ಹೆದರಿಕೆಯ ಮೆಟ್ಟಿ ನಿಂತವರು...

ಮೇಲ್ಛಾವಣಿಯೇ ಇಲ್ಲದ ಮನೆಯಲ್ಲಿ ದಿನಕಳೆಯುವರು...
ಹೊದೆಯಲು ಹೊದಿಕೆ ಇಲ್ಲದಿದ್ದರೂ ಗೊರಕೆ ಹೊಡೆಯುವರು...
ಒಪ್ಪೊತ್ತಿನ ಊಟವಿಲ್ಲದಿದ್ದರೂ ಧೃತಿಗೆಡರು...
ಆದರೂ ಮಾನ ಮರ್ಯಾದೆಗಂಜಿ ಬದುಕುವರು...
ಕಷ್ಟ ಎಂದರೆ ಕೈ ನೀಡುವರು...
ಹೆಗಲಿಗೆ ಹೆಗಲು ಕೊಟ್ಟು ಜೀವಿಸುವರು...
ಯಾರದೋ ಕಣ್ಣೀರಿಗೆ ತಾವಾಗುವರು...
ತಮ್ಮದಲ್ಲದ ನೋವಿಗೂ ಮರುಗುವರು...
 

No comments:

Post a Comment