Wednesday, 24 December 2014

Haleya barahagalu ... (9)

ನಾನೊಬ್ಬ ಬಡವ:

ಓದು ಬರಹ ಬರದವರು...
ಬದುಕ ಹೆಣೆಯಲು ಹೆಣಗುವರು...
ಹೆಣಕ್ಕಿಂತ ಕೀಳಾಗಿ ಕಂಡರೂ...
ಹೆದರಿಕೆಯ ಮೆಟ್ಟಿ ನಿಂತವರು...


ಮೇಲ್ಛಾವಣಿಯೇ ಇಲ್ಲದ ಮನೆಯಲ್ಲಿ ದಿನಕಳೆಯುವರು...
ಹೊದೆಯಲು ಹೊದಿಕೆ ಇಲ್ಲದಿದ್ದರೂ ಗೊರಕೆ ಹೊಡೆಯುವರು...
ಒಪ್ಪೊತ್ತಿನ ಊಟವಿಲ್ಲದಿದ್ದರೂ ಧೃತಿಗೆಡರು...
ಆದರೂ ಮಾನ ಮರ್ಯಾದೆಗಂಜಿ ಬದುಕುವರು...

ಕಷ್ಟ ಎಂದರೆ ಕೈ ನೀಡುವರು...
ಹೆಗಲಿಗೆ ಹೆಗಲು ಕೊಟ್ಟು ಜೀವಿಸುವರು...
ಯಾರದೋ ಕಣ್ಣೀರಿಗೆ ತಾವಾಗುವರು...
ತಮ್ಮದಲ್ಲದ ನೋವಿಗೂ ಮರುಗುವರು...
============================================
ನನ್ನದಲ್ಲದ ನಾಳೆ...
ನಾಳೆಗಾಗಿ ನಾನು...
ನನ್ನದಲ್ಲದ ನೆನ್ನೆ...
ನೆನ್ನೆಯಿಂದ ನಾನು...
ನನ್ನದಲ್ಲದ ಇಂದು...
ಇಂದಿಗಾಗಿ ನಾನು...
ನೆನ್ನೆ ನಾಳೆಗಳ ನಡುವೆ
ಇಂದ ಮರೆತೆನು...
ಹಿಂದಿನದ್ದನ್ನು ಯೋಚಿಸುತ್ತ
ಹಿಂದೆ ಉಳಿದೆನು....

==========================================
ಸಾಯುವಾಗ ಒಂದು ಹನಿ ನೀರ ಕೊಡದವರು..
ಸತ್ತಮೇಲೆ ಅಸ್ಥಿಯ ಗಂಗೇಲಿ ತೇಲಿ ಬಿಟ್ಟರು...
ಹಸಿದಾಗ ಒಂದು ಹಿಡಿ ಅನ್ನ ಹಾಕದವರು..
ಸತ್ತಮೇಲೆ ಪಿಂಡವ ಕಾಗೆಗೆ ಎಸೆದರು...
ಬದುಕಿದ್ದಾಗ ಮಾತಿನಿಂದಲೇ ಚುಚ್ಚಿದವರು..
ಸತ್ತಮೇಲೆ ಫೋಟೊಗೆ ಹೂವಿನ ಹಾರ ಹಾಕಿದರು...
ಎದುರಿದ್ದಾಗ ಪಾಪಿಷ್ಟ ಸಾಯಿ ಎಂದವರು..
ಸತ್ತಮೇಲೆ ಪುಣ್ಯಾತ್ಮ ಬೇಗ ಹೋಗ್ಬಿಟ್ಟ ಎಂದರು....
ಈ ಪಾಪಿ ಜನರು..

==========================================
ಮನದ ಪರದೆಯ ಮೇಲೆ ಮೂಡಿದ ಸಾಲುಗಳೆಲ್ಲವೂ
ನಿನ್ನ ನೆನಪುಗಳ ಪರಿಧಿಯೊಳಗೆ ಗಿರಗಿಟ್ಲೆ ಹೊಡೆಯುತ್ತಿವೆ...
ಕಾಡಿ-ಬೇಡಿ ಅತ್ತು-ಕೂಗಿ ಕರೆಯಬೇಕೆಂಬ ಮನದ ಹಂಬಲವೂ
ನನ್ನ ಅಹಂಮಿನ ಕೋಟೆಯಲಿ ಸತ್ತು ಗೋರಿ ಸೇರಿವೆ.....
sathya.
  

No comments:

Post a Comment